ಎಲ್ಲರ ಸಹಕಾರ , ಪ್ರೊತ್ಸಾಹದಿಂದಾಗಿ , ಕೃಷಿ ಮಿತ್ರರ ಆಸಕ್ತಿಯಿಂದಾಗಿ ನಮ್ಮ ಕೃಷಿ ಗುಂಪಿನ ಸದಸ್ಯರ ಸಂಖ್ಯೆ 700 ದಾಟಿದೆ. ಈಗಂತೂ ಬಹುತೇಕ ಕೃಷಿಕರು ಈ ಗುಂಪಿನ ಬಗ್ಗೆ ಮಾತನಾಡುತ್ತಿರುವುದನ್ನು ನಾನು ಕಂಡಿದ್ದೇನೆ. ಅಡಿಕೆ ಧಾರಣೆ ಏನಾಗಬಹುದು ಎಂದುದಕ್ಕೆ ಈ ಗುಂಪಿನ ಸದಸ್ಯರ ಅಭಿಪ್ರಾಯ ನೋಡಿ ಎಂದೂ ಕೂಡಾ ಅಡಿಕೆ ಬೆಳೆಗಾರರೊಬ್ಬರು ಹೇಳಿದ್ದು ಈ ಗುಂಪು ಬೆಳೆದದ್ದಕೆ ಸಾಕ್ಷಿಯಾಯಿತು.
ಇಲ್ಲಿ ನಾನೂ ಸೇರಿಸಿದಂತೆ ಅನೇಕರು ದಿನವಿಡೀ ತೋಟದಲ್ಲಿರುವ ಕೃಷಿಕರಲ್ಲ. ಹಾಗೆಂದು ಕೃಷಿಯಲ್ಲಿ ಆಸಕ್ತರು ಇಲ್ಲಿ ಇದ್ದಾರೆ. ಹಾಗಾಗಿ ನಾವಿಲ್ಲಿ ಮಾತನಾಡುತ್ತೇವೆ. ಅನುಭವೀ ಕೃಷಿಕರು ಮಾರ್ಗದರ್ಶನ ನೀಡಿ ತಪ್ಪನ್ನು ಸರಿ ಮಾಡುತ್ತಿದ್ದಾರೆ. ಮಾತನಾಡುವುದು ತಪ್ಪಲ್ಲ , ಆಸಕ್ತಿ ಬೆಳೆಯುತ್ತದೆ , ಮುಂದೊಂದು ದಿನ ಇದು ಕೂಡಾ ನಮಗೆ ಸಹಕಾರಿ ಆಗಬಲ್ಲುದು ಎಂಬ ವಿಶ್ವಾಸ ನಮ್ಮದು. ಹಾಗಾಗಿ ನಾವು ತೋಟಕ್ಕೆ ಇಳಿಯುವುದಿಲ್ಲ ಅಂತ ಮಾತನಾಡದೇ ಇರುವುದು ಕೂಡಾ ಸರಿಯಲ್ಲ. ಅಲ್ಲವೇ ?. ಹಾಗಾಗಿ ಮಾಹಿತಿ ಹಾಕಿದಾಗ ಟೀಕೆ ಬಂದರೂ ಅಂಜ ಬೇಕಾಗಿಲ್ಲ. ಎಲ್ಲೇ ಇರಿ , ಒಂಚೂರು ಕಾಳಜಿ ನಮ್ಮ ನೆಲದ ಮೇಲೂ ಇರಲಿ.ನಮ್ಮ ಗುಂಪಿನ ಉದ್ದೇಶವೂ ಅದೇ.
ಒಮ್ಮೆ ಶ್ರೀ ಪಡ್ರೆಯವರು ಹೇಳಿದ್ದರು. ಯಾವುದೇ ಕೆಲಸಕ್ಕೆ ಹೋಗಿ ಒಂದು ಕಾಲು ನೆಲದ ಮೇಲೆಯೇ ಇರಲಿ ಅಂತ.ಈ ಮಾತು ನಿಜಕ್ಕೂ ಅರ್ಥಪೂರ್ಣ.
ಎಲ್ಲರ ಸಹಕಾರ ಹೀಗೆಯೇ ಮುಂದುವರಿಯಲಿ. ಒಂದೊಳ್ಳೆ ವೇದಿಕೆ ಇದಾಗಲಿ.
ಇದು ಒಂದು ಒಳ್ಳೆಯ ಪ್ರಯತ್ನ . ಖಂಡಿತವಾಗಿ ಕೃಷಿ ಮಿತ್ರರು ಇಲ್ಲಿ ತಮ್ಮ ಸಲಹೆ ಸೂಚನೆಗಳನ್ನು ನೀಡುವರಾಗಿ ಆಶಿಸುತ್ತೇನೆ .
ReplyDeleteನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.ಕೃಷಿಕರೇ ಇಲ್ಲಿ ಬರಹಗಾರರು.
ReplyDelete