Saturday, 7 January 2012

ಸುಸ್ಥಿರ ಬೇಸಾಯ ಬಗ್ಗೆ. . .


ಸುಸ್ಥಿರ ಬೇಸಾಯ (ಗಮನಿಸಿ, 'ಸಾವಯವ' ಅಲ್ಲ) ಪಧ್ಧತಿ ಅನುಸರಿಸಿ ಯಶಸ್ಸು ಸಾಧ್ಯವೇ? ಅಥವಾ ಬರೇ‌ ಪತ್ರಿಕೆಗಳಲ್ಲಿ ಮಾತ್ರ ಯಶಸ್ಸೇ? ಪ್ರತ್ಯಕ್ಷ ನೋಡಿದವರಿದ್ದಾರೆಯೇ? (ಗಮನಿಸಿ - ಇಲ್ಲಿ ಯಶಸ್ಸು ಎಂದರೆ ಪ್ರತಿವರ್ಷವೂ ಅಲ್ಪ ಸ್ವಲ್ಪ ಉಳಿತಾಯ ಮಾಡಲು ಸಾಧ್ಯವಾಗುವಂತಿರುವುದು ಹೊರತು 'ಹೆಚ್ಚಿನ ಲಾಭ' ಗಳಿಸುವ ಅರ್ಥ ಅಲ್ಲ)
 ·  ·  · 14 December 2011 at 08:36
    • Darbhe Vijaya Krishna Bhat A.P.SADASHIVA MARIKE,Puttur is a good example.
      14 December 2011 at 18:09 via Mobile · 
    • Mahesh Puchchappady ಬೆರಳೆಣಿಕೆಯ ಮಂದಿ ಸಿಗುತ್ತಾರೋ ಏನೋ ?
      14 December 2011 at 20:21 · 
    • Ramesh Delampady ಸುಸ್ಥಿರ ಅಂದರೆ ಏನು?ನನ್ನ ತಿಳುವಳಿಕೆಯಂತೆ ನಮ್ಮ ತೋಟಕ್ಕೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನೂ ನಮ್ಮ ತೋಟದಲ್ಲೇ ಸಿಗುವಂತೆ ನೋದಿಕೊಳ್ಳುವುದು ಸುಸ್ಥಿರ.ಆದರೆ ಈ ವ್ಯವಸ್ತೆ ಅಸಾಧ್ಯ ಎನ್ನುವಶ್ಟು ಕಠಿಣ.ಆದ್ದರಿಂದ ಕನಿಷ್ಟ ವಸ್ತುಗಳನ್ನು ತೋಟದ ಹೊರಗಿನಿಂದ ತರುವ ವ್ಯವಸ್ತೆ ಸುಸ್ಥಿರ ಎನ್ನ ಬಹುದು.ಇಂತಹ ರೈತರನ್ನು ಹುಡುಕುವುದು ಕೂಡ ಕಠಿಣವೇ.
      15 December 2011 at 20:15 · 
    • Umesh Adiga If one has one cow and one good tree is enough for cultivation of one acre land
      15 December 2011 at 20:17 · 
    • Ramesh Delampady ಇದು ಪಾಲೇಕರ್ ವಿಧಾನವೊ? ಹಾಗಿದ್ದಲ್ಲಿ ಸುಭಾಷ್ ಪಾಲೇಕರ್ ಬ್ಲೋಗ್ಗೆ ಹೋಗಿ ನೋಡುವುದು ಒಳ್ಳೆಯದು.ನಾನಂತೂ ಅದನ್ನು ನಂಬುವುದಿಲ್ಲ.
      15 December 2011 at 20:23 · 
    • Mahadeva Shastry Shastry ಸುಸ್ಥಿರ ಬೇಸಾಯ ಎಂದರೆ ಏನು ನನಗೆ ಗೊತ್ತಿಲ್ಲಾ.. ವಿವರ ಕೊಡಿ ಸಾರ್....
      15 December 2011 at 21:19 · 
    • Mahesha Prasad Neerkaje ಸುಸ್ಥಿರ ಕೃಷಿ ಪಾಲೇಕಾರ್ ದು ಅಂತಲ್ಲ. ಇದೊಂದು ಜನರಲ್ ಕಾನ್ಸೆಪ್ಟ್. ಹೆಚ್ಚಾಗಿ ಅಳವಡಿಕೆ ಆಗಿರುವುದು ಬೈಫ್ ಸಂಸ್ಥೆಯಿಂದ. ಬೈಫ್ ಚಟುವಟಿಕೆ ನಮ್ಮ ಕರಾವಳಿ ಕಡೆ ಕಡಿಮೆ. ಉತ್ತರ ಕರ್ನಾಟದಲ್ಲಿ ಹೆಚ್ಚು.
      16 December 2011 at 11:32 ·  ·  1
    • Mahesha Prasad Neerkaje ಸುಸ್ಥಿರ ಅಂದರೆ ಹೊರಗಿನಿಂದ ಏನನ್ನೂ ತರಲೇಬಾರದು ಅಂತಲ್ಲ (ಅಥವಾ ಇದು ಐಡಿಯಲ್ ಗೋಲ್ ಅಂತಾನೂ ಹೇಳ್ಬಹುದು). ಸುಸ್ಥಿರ ಅಂದರೆ ಸುಲಭವಾಗಿ ಹೇಳಬೇಕಾದರೆ "ಅಲ್ಪಾವಧಿಯಲ್ಲಿ ಹೆಚ್ಚು ಬೆಳೆ ಬೆಳೆಯುವ ಉದ್ದೇಶಕ್ಕೆ ಬದಲಾಗಿ ದೀರ್ಘಾವಧಿಯಲ್ಲಿ ಸ್ಥಿರವಾದ ಆದಾಯ ಬರುವಂತೆ ಕೃಷಿಯನ್ನು ಯೋಜಿಸುವುದು". ಬಹು ಮುಖ್ಯ ಅಂಶಗಳೆಂದರೆ ಮಿಶ್ರಬೆಳೆ, ನೈಟ್ರೋಜನ್ ಕಾರ್ಬನ್ ಮತ್ತು ಇತರ ಪೋಷಕಾಂಶ ಚಕ್ರಗಳ ಸರಿಯಾದ ನಿರ್ವಹಣೆ, ಮಣ್ಣು ಮುಚ್ಚಿಗೆ, ವಾತಾವರಣಕ್ಕೆ ಹೊಂದುವ ಮತ್ತು ಕಮ್ಮಿ ಆರೈಕೆ ಬೇಡುವ ಬೆಳೆಗಳಿಗೆ ಆದ್ಯತೆ ಇತ್ಯಾದಿ. ಸಾವಯವ ತತ್ವವೂ ಸುಸ್ಥಿರ ಕೃಷಿಯ ಭಾಗವೇ ಹೌದು, ಆದರೆ ಅದು ಸಾಮಾನ್ಯವಾಗಿ ’ಸಾವಯವ’ ಎಂದು ಕರೆಯುವ ರೀತಿಯಲ್ಲಿಲ್ಲ.
      16 December 2011 at 11:38 ·  ·  1
    • Mahesha Prasad Neerkaje ಸಾಮಾನ್ಯ್ವವಾಗಿ ಸಾವಯವ ಕೃಷಿ ಎಂದರೆ ರಾಸಾಯನಿಕ ಗೊಬ್ಬರಗಳ ಬದಲಾಗಿ ಸಾವಯವ ಗೊಬ್ಬರ ಬಳಸುವುದು ಎಂದರ್ಥವಾಗುತ್ತದೆ. ಇದು ನಿಜವಾಗಿ ಹೇಳಬೇಕಾದರೆ ರಾಸಾಯನಿಕಕ್ಕಿಂತ ದುಬಾರಿಯೇ ಆಗುತ್ತದೆ.
      16 December 2011 at 11:52 ·  ·  1
    • ನಿರಂತರ ಚಲನೆಯಲ್ಲಿರು ಯನಹೆ ಇನ್ನೂ ಒಂದು ವಿಷಯ ಅರ್ಥ ಆಗಲಿಲ್ಲ...ಗಿಡಗಳು ಎಲ್ಲಾ ವಸ್ತುವನ್ನೂ ರಾಸಾಯನಿಕ ರೂಪಕ್ಕೆ ತಿರುಗಿಸಿಯೇ ಅಲ್ಲವೇ ಸೇವನೆ ಮಾಡುವುದು... ಅಂದಾಗ ಸೊಪ್ಪು ಮತ್ತು ರಾಸಾಯನಿಕ ಗೊಬ್ಬರ ಿವುಗಳಲ್ಲಿ ಅವಕ್ಕೆ ಹೇಗೆ ಬೇಧ ಗೊತ್ತಾಗುತ್ತದೆ..>?
      16 December 2011 at 12:03 ·  ·  2
    • Mahesha Prasad Neerkaje ಗಿಡಗಳಿಗೆ ಬೇಧ ಗೊತ್ತಾಗುವುದಿಲ್ಲ. ಮಣ್ಣಿಗೆ ಗೊತ್ತಾಗುತ್ತದೆ. ಅದು ಇನ್ ಡೈರೆಕ್ಟ್ ಆಗಿ ಗಿಡಗಳ ಮೇಲೆ ಅಫೆಕ್ಟ್ ಆಗುತ್ತದೆ. ರಾಗಿಯಲ್ಲಿರುವುದೂ ಹಾರ್ಲಿಕ್ಸ್ ನಲ್ಲಿರುವುದೂ ಒಳ್ಳೆಯ ಪೋಷಕಾಂಶಗಳೇ ಆದರೂ ರಾಗಿ ಆರೋಗ್ಯಕ್ಕೆ ಹೆಚ್ಚು ಉತ್ತಮ. ಇದೇ ರೀತಿ.
      16 December 2011 at 12:05 ·  ·  2
    • ನಿರಂತರ ಚಲನೆಯಲ್ಲಿರು ಈಗ ನಮ್ಮ ಹಟ್ಟಿಯ ಗೊಬ್ಬರದಲ್ಲಿರುವ ಻ಂಶಗಳೇ ರಾಸಾಯನಿಕ ಗೊನ್ನರದಲ್ಲೂ ಇದ್ದರೆ ..?
      16 December 2011 at 12:07 · 
    • Mahesha Prasad Neerkaje ಮಣ್ಣಿನ Texture, ಅದರಲ್ಲಿನ ಗಾಳಿಯಾಡುವಿಕೆ, ನೀರಿನ ಅಂಶ, ಸೂಕ್ಷಾಣುಜೀವಿಗಳು ಇವೆಲ್ಲವೂ ಗಿಡದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಪುರಾವೆ ಸಹಿತ ಪ್ರೂವ್ ಆಗಿದೆ.
      16 December 2011 at 12:07 ·  ·  1
    • ನಿರಂತರ ಚಲನೆಯಲ್ಲಿರು ನಾ ಹೇಳಿದ್ದು ಹಾಗಲ್ಲ.. ರಾಸಾಯನಿಕ ಗೊಬ್ಬರದ ಅಂಶವೇ ಕೊಟ್ಟಿಗೆ ಗೊಬ್ಬರದಲ್ಲೂ ಇದ್ದರೆ ಸ್ವಲ್ಪ ಪ್ರಮಾಣದಲ್ಲಿ ಬಳಸಬಹುದಾ..?
      16 December 2011 at 12:08 · 
    • Mahesha Prasad Neerkaje ಪೋಷಕಾಂಶದ ಲಭ್ಯತೆಯೂ ಬಹುಮಟ್ಟಿಗೆ ಕಾರಣವಾಗುತ್ತದೆ. ಇದನ್ನು ಹೆಚ್ಚಿನ ಕೃಷಿಕರು ಯೋಚಿಸುವುದಿಲ್ಲ. ಅರ್ಧ ಕೇಜಿ ಸುಫಲಾ ಹಾಕಿದರೆ ಅದೆಲ್ಲವೂ ಮರಕ್ಕೆ ಸಿಗುತ್ತದೆ ಅಂತ ಊಹಿಸುತ್ತಾರೆ. ಅಲ್ಲೇ ಎಡವುತಾರೆ. ಅಸಲಿ ಆ ಅರ್ಧ ಕೇಜಿಯಲ್ಲಿ ನೀರಿನಲ್ಲಿ ಕರಗಿ ಪೋಲಾಗುವುದು ಎಷ್ಟು, ಡಿ ಕಾಂಪೋಸ್ ಆಗಿ ವಾತಾವರಣಕ್ಕೆ ಸೇರುವುದೆಷ್ಟು, ಇದನ್ನೆಲ್ಲ ಯೋಚಿಸಬೇಕಾಗುತ್ತದೆ. ಹಟ್ಟಿ ಗೊಬ್ಬರದಲ್ಲಿ ರಾಸಾಯನಿಕ ಗೊಬ್ಬರದಲ್ಲಿ ಒಂದೇ ಪ್ರಮಾಣದ ಪೋಷಕಾಂಶ ಇದ್ದರೂ ಹಟ್ಟಿ ಗೊಬ್ಬರ ಪೋಷಕಾಂಶವನ್ನು ನಿಧಾನಕ್ಕೆ ಮಣ್ಣಿಗೆ ಬಿಡುಗಡೆ ಮಾಡುತ್ತದೆ. ರಾಸಾಯನಿಕ ಬಹು ಬೇಗನೇ ಒಂದೋ ಮಣ್ಣಿನಲ್ಲಿ ಬೆರೆತುಬಿಡುತ್ತದೆ ಅಥವಾ ಪೋಲಾಗುತ್ತದೆ. ಇದೇ ವ್ಯತ್ಯಾಸ.
      16 December 2011 at 12:10 ·  ·  2
    • Mahesha Prasad Neerkaje ರಾಸಾಯನಿಕ ಬಳಸಲೇ ಬಾರದೆಂಬ ’ಮಡಿ’ ಯನ್ನು ಒಪ್ಪುವುದು ಸ್ವಲ್ಪ ಕಷ್ಟ. ಸಮಯ ಸಂದರ್ಭ ನೋಡಿಕೊಂಡು ಬಳಸಬಹುದು ಅನಿಸುತ್ತದೆ. ಆದರೆ ದೀರ್ಘಾವಧಿಯಲ್ಲಿ ರಾಸಾಯನಿಕದ ಮರ್ಜಿಯಿಂದ ಹೊರಬರುವುದೇ ಒಳ್ಳೆದು.
      16 December 2011 at 12:11 ·  ·  1
    • ನಿರಂತರ ಚಲನೆಯಲ್ಲಿರು ಸರಿ ಸರಿ... ನಾನು ಅದೇ ವಿಚಾರದಲ್ಲಿದ್ದೆ.. ಆದರೆ ನಾನು ಇಲ್ಲಿಯವರೆಗೆ ರಾಸಾಯನಿಕ ಬಳಸಿದ್ದು ಇಲ್ಲ... ಕೊಟ್ಟಿಗೆ ಗೊಬ್ಬರ ಮತ್ತು ಹಸಿ ಸೊಪ್ಪು ಅಡಿಕೆ ತೋಟಕ್ಕೆ ಹಾಕುತ್ತೆನೆ..ಸಾವಯವ ದೃಢಿಕರಣ ಕೂಡಾ ಆಗಿದೆ..>
      16 December 2011 at 12:12 · 
    • Mahesha Prasad Neerkaje ಒಳ್ಳೇದು :) ಹಟ್ಟಿ ಗೊಬ್ಬರ ಹೊಂದಿಸುವುದೇ ಕಷ್ಟ. ಒಂದು ವೇಳೆ ಹೊಂದಿಸಿದರೆ ಬೇರೆ ಗೊಬ್ಬರಗಳ ಅಗತ್ಯವಿಲ್ಲ.
      16 December 2011 at 12:13 · 
    • ನಿರಂತರ ಚಲನೆಯಲ್ಲಿರು ಯಲ್ಲಾಪುರ ತಾಲೂಕಿನವರಿಗೆ ಬಯಲು ಸೀಮೆಯ ಒಡನಾಟ ಹತ್ತಿರ.. ಅಲ್ಲಿಂದಲೇ ವರುಷಕ್ಕೊಮ್ಮೆ ಗೊಬ್ಬರ ತರಿಸುವುದು.. ಒಂದು ಟ್ರಕ್ ಗೊಬ್ಬರಕ್ಕೆ 8500-00 ಮತ್ತು ಕುರಿ ಗೊಬ್ಬರ ಬೇಕಾದರೆ 11000-00..>
      16 December 2011 at 12:16 · 
    • Mahesha Prasad Neerkaje ಓಹ್ ಹಾಗಿದ್ದರೆ ಒಳ್ಲೇದೇ ಆಯ್ತು ಬಿಡಿ
      16 December 2011 at 12:17 · 
    • Mahesha Prasad Neerkaje ಟ್ರಕ್ ಎಂದರೆ ಎಷ್ಟು ಟನ್? ಐದು? ಆರು?
      16 December 2011 at 12:17 · 
    • ನಿರಂತರ ಚಲನೆಯಲ್ಲಿರು ಇದು ಸಮಸ್ಯೆ ..ಟ್ರಕ್ 6 ಟೈರಿಂದು... ನಂಗಳ ದೊಡ್ಡ ಬುಟ್ಟಿಯ ಲೆಕ್ಕದಲ್ಲಿ ಸುಮಾರು 310-320 ಬುಟ್ಟಿ ಗೊಬ್ಬರ ಬತ್ತು...ಕುರಿಗೊಬ್ಬರ ಜಾಸ್ತಿ ಬತ್ತು ಅದು 10 ಟೈರು ಗಾಡಿ.. ಟನ್ ಲೆಕಕ್ ಗೊತ್ತಿಲ್ಲ...ಹಟ್ಟಿಗೊಬ್ಬರದಲ್ಲಿ ಮಣ್ಣು ಕೂಡ ಸೇರಿಸಿ ಕಳಿಸುತ್ತ..ಕುರಿ ಗೊಬ್ಬರ ಶುಧ್ಧ ಇರ್ತು...>
      16 December 2011 at 12:27 · 
    • Mahesha Prasad Neerkaje ಓಹ್ :)
      16 December 2011 at 12:29 · 
    • Ramesh Delampady ನಮ್ಮಲ್ಲಿಗೆ ಕುರಿ ಗೊಬ್ಬರ ೫೦೦೦೦ ರೂ. ಬಳ್ಳಾರಿಯಿಂದ
      16 December 2011 at 19:58 · 
    • Ramesh Delampady ಅಂದರೆ ಸುಸ್ತಿರ ಕ್ರಿಶಿಯಲ್ಲಿ ರಾಸಯನಿಕಗಳನ್ನೂ ಬಳಸಬಹುದೇ?
      16 December 2011 at 20:24 · 
    • Mahesha Prasad Neerkaje ‎{ಅಂದರೆ ಸುಸ್ತಿರ ಕ್ರಿಶಿಯಲ್ಲಿ ರಾಸಯನಿಕಗಳನ್ನೂ ಬಳಸಬಹುದೇ?} That is my personal opinion only. The topic slightly deviated, thats why.
      16 December 2011 at 21:53 · 
    • Mahesh Puchchappady ಸುಸ್ಥಿರ ಕೃಷಿಯ ಬಗ್ಗೆ ಸಮಗ್ರ ಮಾಹಿತಿ ಸಿಕ್ಕಿತು ಅಂತ ಅನಿಸುತ್ತೆ. . , ಒಳ್ಳೆಯ ಚರ್ಚೆ. .
      16 December 2011 at 22:06 ·  ·  1
    • Mahesha Prasad Neerkaje It would have been nice if some experienced one shared their knowledge.
      16 December 2011 at 22:07 ·  ·  1
    • Ramesh Delampady ಯಾವುದೇ ವಿಶಯದಲ್ಲಿ ಸಮಗ್ರ ಮಾಹಿತಿ ಅನ್ನುವುದು ಬಹುಶಹ ಒಂದು ಮರೀಚಿಕೆ.ಉತ್ತಮ ಚರ್ಚೆ ನಮ್ಮ ಜ್ನಾನ ಹೆಚ್ಚಿಸುತ್ತದೆ,ಅದು ಮುಖ್ಯ.
      16 December 2011 at 22:09 · 

No comments:

Post a Comment