Saturday, 7 January 2012

ಅಡಿಕೆ ಕೊಯ್ಲು ಮತ್ತು ಅಮವಾಸ್ಯೆ. .


ಅಡಿಕೆ ಕೊಯ್ಲನ್ನು ಅಮವಾಸ್ಯೆ ಹತ್ತಿರ ಮಾಡಿದರೆ ಒಳ್ಳೆಯದು ಅಂತ ಹಿರಿಯರು ಹೇಳುತ್ತಾರೆ, ಹಾಗೆ ಕೊಯ್ಲು ಮಾಡಿದರೆ ಒಳಗಿನ ಬೆಂಡು(ತಿರುಳು) ಚೆನ್ನಾಗಿರುತ್ತದೆ ಅಂತಾರೆ ,ನಿಜವಾ ? ಈ ಬಗ್ಗೆ ಯಾರಿಗಾದರೂ ಗೊತ್ತಿದೆಯಾ?
 ·  ·  · 14 December 2011 at 20:23

    • ನಿರಂತರ ಚಲನೆಯಲ್ಲಿರು gottille. . Nammalli prati mangalavara mattu amavasyeyadin kone koylu maduvudilla. . .
      14 December 2011 at 20:49 via Mobile · 

    • Shankaranarayana Bhat ಹೌದು...ಹಾಗೆ ನಮ್ಮ ಹಿರಿಯರು ಹೇಳುತ್ತಿದ್ದರು ..ಅದಲ್ಲದೆ ಅಮಾವಾಸ್ಯೆ ಯಾ ಹತ್ತಿರ ಕೊಯ್ಲು ಮಾಡಿದರೆ ಆ ಅಡಕೆ ಹಳತ್ತು ಮಾಡಿದರೆ ಅಡಕೆ ಕಣ್ಣು ತೂತು ಮಾಡುವೆ ಗುಗ್ಗುರ (ಡಂಕಿ ) ಆಗುವೂದು ಕೂಡಾ ಕಡಿಮೆ ..
      14 December 2011 at 21:04 ·  ·  4

    • Mahesh Puchchappady ಕಾರಣ ಏನಾದರೂ ಗೊತ್ತಾ ? ನನಗೊಬ್ಬರು ಹೇಳಿದರು,ಅಮವಾಸ್ಯೆಯ ಸಮಯದಲ್ಲಿ ರಾತ್ರಿ ವೇಳೆ ಕೆಲವು ಕೀಟಗಳಿಗೆ ಕಾರ್ಯಾಚರಿಸಲು ಆಗುವುದಿಲ್ಲ , ಹಾಗಾಗಿ ಥಿಯರಿ ಅಂತಾರೆ . ಇದು ಕಾರಣ ಆಗಿರಬಹುದಾ ?
      14 December 2011 at 21:11 ·  ·  1

    • Shankaranarayana Bhat ಆಗಿರಲೂ ಬಹುದು ..ಮನೆ ಕಟ್ಟಲು ಬೇಕಾಗುವ ಮರಗಳನ್ನುಕೂಡಾ ಅಮಾವಾಸ್ಯೆ ಯ ಹತ್ತಿರದ ದಿನಗಳಲ್ಲಿ ಕಡಿಯುವುದು ವಾಡಿಕೆ ...ಅಂಥಹ ಮರಗಳಿಗೆ ಸುರಿ(ಒಣ ಮರಗಳನ್ನು ತೂತು ಮಾಡುವ ಜೀವಿ ) ಕೂಡಾ ಬೀಳುವುದಿಲ್ಲ ..
      14 December 2011 at 21:26 ·  ·  3

    • Venkata Krishnakk ಬಿದಿರು ಕಡಿಯವುದಕ್ಕೂ..ಹೀಗೇ ಹೇಳ್ತಾರಲ್ಲಾ...??..
      ಬುಟ್ಟಿ ಹೆಣೆಯುವ ಬಳ್ಳಿ( ಎಂಜಿರ್)ಗೂ ಹೀಗೇ ಹೇಳ್ತಾರೆ..ಅಲ್ವಾ..??

      14 December 2011 at 21:29 ·  ·  3

    • Mahesh Puchchappady ಏನಾದರೂ ವೈಜ್ಞಾನಿಕ ಕಾರಣ ಇರಬಹುದು , ಅಲ್ಲವೇ?
      14 December 2011 at 21:44 ·  ·  2

    • ನಿರಂತರ ಚಲನೆಯಲ್ಲಿರು ಹೌದು ,,ಶಂಕರನಾರಾಯಣರು ಹೇಳಿದಂತೆ ನಮ್ಮಲ್ಲೂ ಕೂಡ ಮನೆ ಕಟ್ಟುವ ಮರಗಳ ಕಡಿಯಬೇಕಾದರೆ ಅಮವಾಸ್ಯೆಯ ಹತ್ತಿರವೇ ಕಡಿಯುವುದು..ಹಾಗೆ ಕಡಿದವಕ್ಕೆ ಸುರಿ( ಕುಟ್ಟು) ಬೀಳುವುದಿಲ್ಲ.. ಇದು ಅನುಭವಜನ್ಯ.. ವೈಜ್ನಾನಿಕ ಕಾರಣ ಹುಡುಕಬೇಕು..
      15 December 2011 at 10:14 · 

    • Mahadeva Shastry Shastry ನಿರಂತರ ಚಲನೆಯಲ್ಲಿರು, ಸರಳವಾದ ಕಾರಣ ಹುಣ್ಣಿಮೆ ಯಂದು ಭೂಮಿಯ ಎಲ್ಲಾ ನೀರು ಉಬ್ಬರ ದಿಂದ ಮೇಲೆ ಬರುತ್ತದೆ.. ಸಮುದ್ರ ದಲ್ಲಿ ಉಬ್ಬ ರ ಇಳೀತ ಎಂಬುದು ಹುಣ್ಣಿಮೆ ಅಮವಾಸ್ಯೆ ಯಂದು ಇರುತ್ತದೆ.. ನೀರಿನ ಅಂಶ ವಿರುವ ಎಲ್ಲಾ ವಸ್ತುಗಳಲ್ಲಿ ಜೀವಿಗಳಲ್ಲಿ ಬಿದಿರು ಇತ್ತ್ಯಾದಿ ಮರಗಳಲ್ಲೂ ಹುಣ್ಣಿಮೆ ಗೆ ನೀರಿನ ಅಂಶ ಜಾಸ್ತಿ, ಅಮವಾಸ್ಯೆ ಯಂದೂ ನೀರಿನ ಅಂಶ ಕಡಿಮೆ.. ಅದಕ್ಕೆ ಅಮವಾಸ್ಯೆ ಎದುರು ದಿನಗಳಲ್ಲಿ ಮರ ಕಡಿಯಿರಿ.. ಇದ ನ್ನ ನಾವು ನಮ್ಮ ಮನೆಯ ಲ್ಲಿ ಕೆಲಸಕ್ಕೆ ಬರುವ ಮುದುಕ ಕೂಲಿ ಯವರಲ್ಲ ಕೇಳಿದರೆ ತಿಳೀಯುತ್ತದೆ.. ವಿಜ್ನಾನಿ ಗಳು ಬೇಡ....
      15 December 2011 at 10:47 ·  ·  4

    • Mahadeva Shastry Shastry ಮತ್ತೊಂದು ವಿಚಾರ ಭೂಮಿ ಯ ಮುಕ್ಕಾಲಂಶ ನೀರು.. ಹೇಳಿ ಸಮಾಜ ಪಾಠ ಹೇಳುತ್ತಾರೆ.. ವಿಜ್ನಾನ ಮನುಷ್ಯ ನ ದೇಹ ಲ್ಲೂ ಮುಕ್ಕಾಲಂಶ ನೀರು ಹೇಳು್ತ್ತಾರೆ... ಹುಣ್ಣಿಮೆ ಅಮವಾಸ್ಯೆ ಮನುಷ್ಯ ದೇಹದೆ ಮೇಲೆ ಪರಿಣಾಮ ಬೀರುತ್ತದೆಯೆ...?.
      15 December 2011 at 10:51 ·  ·  2

    • ನಿರಂತರ ಚಲನೆಯಲ್ಲಿರು ಧನ್ಯವಾದಾ ... ನೀವು ಹೇಳಿದ್ದು ಹೌದು...ಹುಣ್ಣಿಮೆ ಮತ್ತು ಅಮವಾಸ್ಯೆ ಮನುಷ್ಯನ ಮನಸ್ಸಿನ ಮೇಲಂತೂ ಖಂಡಿತ ಪರಿಣಾಮ ಮಾಡುತ್ತದೆ..
      15 December 2011 at 11:10 · 

    • Mahesh Puchchappady Mahadeva Shastry Shastry ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ನೀರಿನ ಅಂಶ ಕಡಿಮೆ ಇರುವುದರಿಂದ ಆ ಸಮಯದಲ್ಲಿ ಕಟಾವಿಗೆ ಹೇಳುತ್ತಿರಬಹುದು. ಇದು ರೈತರ ಸಂಶೋಧನೆ ಅನ್ನ ಬಹುದಲ್ಲಾ ?
      15 December 2011 at 19:50 ·  ·  1

    • Umesh Adiga amavashyeyalli nadi/samudradalli ilitha iruvanthe,gidadalli saha neerina ansh kadime iruththe
      15 December 2011 at 20:19 ·  ·  1

    • Mahesh Puchchappady Umesh Adiga ಅದೊಂದೇ ಕಾರಣ
      15 December 2011 at 20:24 · 

    • Mahadeva Shastry Shastry ಚಂದ್ರ ಸೂರ್ಯರು ಮುಕ್ಕಾಲಂಶ ದ್ರವ ಉಳಿದ ಕಾಲ ಅಂಶ ಘನ ಅಂಶ ಇರು ವ ಭೂಮಿ ಹಾಗೂ ಮನುಷ್ಯ ನ ಮೇಲೆ ಪರಿಣಾಮ ಈ ಎರಡು ಗ್ರಹ ಗಳು ಆಕಾಶದಲ್ಲಿ ಇರುವಾಗ ಮಾಡುವ ವಾತಾವರಣ ದ ಏರುಪೇರು ಮನುಷ್ಯನ ದೇಹ ದಲ್ಲು ಆಗುವುದಾದರೆ... ಉಳಿದ ಗ್ರಹ ಗಳು ಮನುಷ್ಯನ ಮೇಲೆ ಪರಿಣಾಮ ಬೀರದೇ..? ಅದರ ಆಧಾರ ದಲ್ಲಿ ಜ್ಯೋತಿಷ್ಯ ಶಾಸ್ತ್ರ ಅನುಭವಕ್ಕೆ ಬಂದ ವಿಚಾರಗಳನ್ನ ಹೊಂದಿ ಕೊಂಡು ಜ್ಯೊತಿಷ್ಯ್ದ ಶ್ಲೋಕ ಗಳೂ ದಾಖಲಿಸ್ಪಟ್ಟವಂತೆ.....!!!
      15 December 2011 at 21:05 · 

No comments:

Post a Comment