Saturday, 7 January 2012

ರಬ್ಬರ್ ಬೆಳೆ ?


rubber gidagaligoo roga baruttideyaa? rubber belryalu shurumaadabahudaa?
 ·  ·  · Thursday at 15:37

    • Shankara Bhat ರಬ್ಬರ್ ಬೆಳೆಸಲು ನೀವು ಯೋಚಿಸುತ್ತಿರುವುದು ಸ್ವಾಗತಾರ್ಹ.ರಬ್ಬರ್ ಬೆಳೆ ಬಗ್ಗೆ ಕೆಲವು ಸಲಹೆಗಳು:1.ಮೊದಲು ಈಗಾಗಲೇ ನಿಮ್ಮ ಊರಿನಲ್ಲಿ ಈ ಬೆಳೆ ಯಾರಾದರೂ ಬೆಳೆಸಿದ್ದಾರೆಯೇ.?ಗಮನಿಸಿ; ಅವರ ಅನುಭವ ಹೇಗಿದೆ ಕೇಳಿತಿಳಿದುಕೊಳ್ಳಿ.ಎಲ್ಲಾ ಕಡೆ ರಬ್ಬರ್ ಚೆನ್ನಾಗಿ ಬರುವುದಿಲ್ಲ.2.ರಬ್ಬರ್ ಬೆಳೆಗೆ ಸಾಕಷ್ಟು ರೋಗಗಳಿವೆ.3.ತಳಿ ಆಯ್ಕೆ ಬಗ್ಗೆ ಅನುಭವಸ್ಥರ ಸಲಹೆ (ರಬ್ಬರ್ ಬೋರ್ಡ್ ನವರೂ ಮಾರ್ಗದರ್ಶನ ನೀಡುತ್ತಾರೆ)ಪಡೆಯಿರಿ.4.ಒಳ್ಳೆಯ ರಬ್ಬರ್ ತೋಟಗಳನ್ನು ಸಂದರ್ಶಿಸಿ.ನಮ್ಮಊರಿನಲ್ಲಿ
      ಒಳ್ಳೆಯ ರಬ್ಬರ್ ತೋಟಗಳು ಇವೆ.(ದ.ಕ ಜಿಲ್ಲೆ)ನಮ್ಮಲ್ಲಿಗೇ ಬನ್ನಿ ಸ್ವಾಗತ.

      Thursday at 19:00 ·  ·  3

    • Mahesh Puchchappady ರಬ್ಬರ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಸುಳ್ಯ ತಾಲೂಕಿನಲ್ಲಿ ಚೆನ್ನಾಗಿ ಬರುತ್ತದೆ. ಸಾಕಷ್ಟು ರೋಗ ಇದೆ, ಈಗ ಎಲೆ ಉದುರಿ ಚಿಗುರುವ ಹೊತ್ತಿಗೆ ರೋಗ ಬರುತ್ತ್ದೆ , ಚಿಗುರಿಗೆ. .
      Thursday at 19:40 ·  ·  2

    • Shankaranarayana Bhat ನಾನೋರ್ವ ರಬ್ಬರ್ ಬೆಳೆಗಾರ ೧೨೦೦ ಗಿದಗಳನ್ನು ಹಾಕಿದ್ದೇನೆ ಈಗ ೭ ನೇ ವರ್ಷ ಗಿಡ ಗಳು ಚೆನ್ನಾಗಿ ಬಂದಿವೆ ..ಮುಂದಿನ ವರ್ಷದಿಂದ ಹಾಲು ತೆಗೆಯಲು ಪ್ರಾರಂಭಿಸ ಬೇಕೆಂದಿದ್ದೇನೆ ...ಮಳೆಗಾಲದಲ್ಲಿ ಕೊಳೆರೋಗ (ಕಳೆದ ಮಳೆಗಾಲದಲ್ಲಿ )ಮಾತ್ರ ಬಂದಿದೆ ಅದಲ್ಲದೆ ಬೇರೆ ಯಾವ ರೋಗ ಕೂಡಾ ಇದುವರೆಗೆ ಬಾದಿಸಿಲ್ಲ ..
      Thursday at 22:23 ·  ·  1

    • Shankara Bhat ತಳಿ ಯಾವುದು.?ಪಿಂಕ್ ರೋಗ(ಗೆಲ್ಲು,ಮರ, ಒಣಗಿ ಸಾಯುವುದು) ಬಾಧಿಸಿಲ್ಲವೇ..?ನಮ್ಮಲ್ಲಿದೆ.
      Friday at 12:26 · 

    • Shreepada Rao ಶ೦ಕರ ಅಣ್ಣ,ನಿಮ್ಮ ಸ್ವಾಗತಕ್ಕೆ ಧನ್ಯವಾದಗಳು.. ನಮ್ಮದು ಜೇಡಿ ಮಣ್ಣು ಮತ್ತು ಜೌಳು ಜಾಸ್ತಿ ಇರುವ ಜಾಗ. ಹತ್ತಿರ ಎಲ್ಲೂ ರುಬ್ಬೆರ್ ಹಾಕಿಲ್ಲ. ಆದ್ರೆ ಇದೇ ಮಣ್ಣಿನ ರೀತಿ ಇರುವ ೧೦ ಕಿ ಮೀ ದೂರದಲ್ಲಿ ಹಾಕಿದ್ದಾರೆ,ಇಳುವರಿ ಗೊತ್ತಿಲ್ಲ. ಈಗ ನನ್ನ ತಮ್ಮ ಕೇರಳದವರಿಗೆ ಜಮೀನು ಮಾರಿಬಿಟ್ಟ..ಅವರು ಹಾಕುವ ನಿರೀಕ್ಶೆಯಲ್ಲಿದ್ದಾರೆ ಆದರೆ ಅವರಿಗೆ ಖುಶ್ಕಿ ಸಿಕ್ಕಿದೆ.ನನಗೆ ತೋಟ ಹಾಕಲು ಬರುವ ಜಾಗ ಹಾಗಾಗಿ ಅಲ್ಲಿ ಆಗುತ್ತಾ ಇಲ್ಲವಾ ಎ೦ದು ಚಿ೦ತೆ.
      Friday at 19:28 ·  ·  1

    • Mahesh Puchchappady ಕೇರಳದವರು ಇತ್ತೀಚೆಗೆ ಗೋವಾ ಆಂಧ್ರ ಪ್ರದೇಶ ಗಡಿಭಾಗದ ರತ್ನಗಿರಿ ಕಡೆಯಲ್ಲೂ ರಬ್ಬರ್ ಹಾಕುತ್ತಿದ್ದಾರೆ.
      Friday at 19:30 ·  ·  1

    • Mahesh Puchchappady ರಬ್ಬರ್ ಗೆ ಈಗ ಎಲೆ ಉದುರಿ ಚಿಗುರುವಾಗ ಚಿಗುರು ಮುರುಟುವ ರೋಗ ಇದೆ, ಮಳೆಗಾಲದಲ್ಲಿ ಎಲೆ ಕೊಳೆದು ಉರುದುತ್ತದೆ. ಇದೆರಡು ನಮ್ಮಲ್ಲಿ ಕಾಡುವ ಪ್ರಮುಖ ರೋಗ. ಇದಕ್ಕೆ ಸೂಕ್ತವಾದ ಔಷಧಿಗಳು ಇವೆ, ಮಳೆಗಾಲದಲ್ಲಿ ಓಯಿಲ್ ನೊಂದಿಗೆ ಕಾಪರ್ ಓಕ್ಸಿ ಕ್ಲೋರೈಡ್ ಸೂಕ್ತವಾಗಿದೆ.
      Friday at 19:32 ·  ·  1

    • Shreepada Rao ಮತ್ತೆ ನನಗೆ ಈ ಒ೦ದು ಎಕರೆ ತೋಟದಲ್ಲಿಯ ಅಡಿಕೆ ಉತ್ಪತ್ತಿ ಸಾಕಾಗುವುದಿಲ್ಲ. ಅಕೇಸಿಅ ಹಾಕಿದ ಜಾಗ ೧-೧/೨ ಎಕರೆ ಗದ್ದೆ ೧ ಎಕರೆ ಇದೆ ಅದರಲ್ಲಿ ಮಾಡಬಹುದಾ? ಹೇಗಾದರೂಉತ್ಪತ್ತಿ ಜಾಸ್ತಿ ಮಾಡಿಕೊಳ್ಳದಿದ್ರೆ ಜಮೀನು ಮಾರೂದೆ ಆಗುತ್ತ್ತು.
      Friday at 19:33 · 

    • Shankara Bhat shreepada Rao,
      ಅಣ್ಣಾ ನಮಸ್ಕಾರ,
      ರಬ್ಬರ್ ಜವುಗು ಮಣ್ಣಿನಲ್ಲಿ,ನೀರು ನಿಲ್ಲುವ ಜಾಗದಲ್ಲಿ ಚೆನ್ನಾಗಿ ಬರುವುದಿಲ್ಲ.ಬಹುಶಃ ನಿಮ್ಮ ಊರು ಸಾಗರ ಅಲ್ಲವೇ.?ಆ ಪ್ರದೇಶದಲ್ಲಿ ಚಳಿ ಜಾಸ್ತಿ.ರಬ್ಬರಿಗೆ ಉಷ್ಣಾಂಶ ಹೆಚ್ಚಿರಬೇಕು.ಕರಾವಳಿಯಿಂದ ಘಟ್ಟಪ್ರದೇಶದ ವರೆಗೆ ರಬ್ಬರ್ ಚೆನ್ನಾಗಿ ಬೆಳೆಯುತ್ತದೆ,ಉಳಿದಲ್ಲಿ ಬೆಳೆದರೂ ಇಳುವರಿ
      ಕಡಿಮೆ.

      Friday at 19:46 ·  ·  4

    • Shreepada Rao ಹೊಸನಗರ ಹತ್ತಿರ
      Friday at 19:51 · 

    • Shreepada Rao ಇಳುವರಿ ಕಡಿಮೆಯೋ ಜಾಸ್ತಿಯೋ..ಅದು ಬೇರೆ,ಅಕೇಸಿಅ ಒಳ್ಳೇದೋ ರಬ್ಬರ್ ಒಳ್ಳೇದೋ ಅ೦ತ
      Friday at 19:53 · 

    • Shankara Bhat ಪ್ರಯತ್ನಿಸಿ ನೋಡಿ,ಹೊಸನಗರ, ನಗರ,ಸಾಗರ,ರಿಪ್ಪನ್ ಪೇಟೆ,ಇಲ್ಲೇಲ್ಲಾ ರಬ್ಬರ್ ಬೆಳೆ ಹಾಕಿದ್ದಾರೆ.ಆ ಬೆಳೆಗಾರರನ್ನು ಬೇಟಿಯಾಗಿ ಚರ್ಚಿಸಿ ನಿರ್ಧರಿಸಿ.ಶುಭಸ್ಯಶೀಘ್ರಮ್. ನಿಮಗೆಶುಭವಾಗಲಿ.
      Friday at 20:02 ·  ·  2

    • Shreepada Rao ಸರಿ ಅಣ್ಣಾ ಧನ್ಯವಾದಗಳು.
      Friday at 20:05 · 

    • ನಿರಂತರ ಚಲನೆಯಲ್ಲಿರು ಯಲ್ಲಾಪುರ ಮತ್ತು ಶಿರಸಿ ಭಾಗದಲ್ಲಿ ರಬ್ಬರ್ ಬೇಳೆಯಬಹುದಾ.. ತುಂಬಾ ಶಿತದ ವಾತಾವರಣ ಇಲ್ಲಿ..
      Yesterday at 11:58 ·  ·  1

No comments:

Post a Comment