sರತ - ಪಾಕಿಸ್ತಾನ ಮುಕ್ತ ವ್ಯಾಪಾರ ಒಪ್ಪಂದ
ಅಡಿಕೆ ಮಾರುಕಟ್ಟೆಗೆ ಮತ್ತೆ ಸಿಗಲಿದೆ ಮಾನ್ಯತೆ ; ಗರಿಗೆದರಿದ ನಿರೀಕ್ಷೆಗಳು
ಪುತ್ತೂರು: ಅಡಿಕೆ ಮಾರುಕಟ್ಟೆ ಚೇತರಿಕೆಗೆ ಈಗ ಮತ್ತೊಂದು ಅಂಶ ಸೇರಿಕೊಂಡಿದೆ.ಮುಂದಿನ ವರ್ಷದ ಅಂತ್ಯದೊಳಗೆ ಭಾರತದಿಂದ ಪಾಕಿಸ್ತಾನಕ್ಕೆ ಮುಕ್ತವಾಗಿ ಅಡಿಕೆ ಸಾಗಾಟ ಮಾಡಬಹುದಾಗಿದೆ. ಹೀಗಾಗಿ ಭಾರತದ ಅಡಿಕೆಯು ನೇರವಾಗಿ ಪಾಕಿಸ್ತಾನಕ್ಕೆ ಹೋಗಬಹುದಾದ್ದರಿಂದ ಅಡಿಕೆ ಧಾರಣೆ ಸುಧಾರಿಸಲು ಇದು ಮಹತ್ವ ಪಡೆದುಕೊಳ್ಳಲಿದೆ.
ಅಡಿಕೆ ಬೆಳೆಗಾರರಿಗೆ ಇದೊಂದು ಸಿಹಿ ಸುದ್ದಿಯೇ ಹೌದು. ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ಭಟ್ ವರ್ಮುಡಿಯವರು ಅಡಿಕೆ ಮಾರುಕಟ್ಟೆಯ ಬಗ್ಗೆ ಅಧ್ಯಯನ ಮಾಡುತ್ತಲೇ ಧಾರಣೆಯ ಬಗ್ಗೆ ನಿಖರವಾಗಿ ಮಾತನಾಡಬಲ್ಲವರು. ಇತ್ತೀಚೆಗೆ ಅವರು ನಡೆಸಿ ಅಧ್ಯಯನವನ್ನು ಹಂಚಿಕೊಂಡಿದ್ದಾರೆ , ಭಾರತ ಮತ್ತು ಪಾಕಿಸ್ತಾನದ ನಡುವೆ ಆಹಾರ ವಸ್ತುಗಳು ಸೇರಿದಂತೆ ಇನ್ನಿತರ ವಸ್ತುಗಳ ವಿನಿಮಯದ ಮುಕ್ತ ವ್ಯಾಪಾರ ಒಪ್ಪಂದವು ನಡೆಯುತ್ತಿತು. ಇತ್ತೀಚೆಗೆ ಅಂದರೆ ನ.೧೫ ರಂದು ನಡೆದ ಹೊಸ ಒಪ್ಪಂದದ ಪ್ರಕಾರ ಒಟ್ಟು ೭೦೦೦ ವಸ್ತುಗಳು ಇನ್ನು ಮುಂದೆ ಭಾರತ ಹಾಗೂ ಪಾಕಿಸ್ತಾನದ ನಡುವೆ ವಿನಿಮಯ ಆಗಲಿದೆ. ಈ ಹಿಂದೆ ಕೇವಲ ೧೯೪೬ ವಸ್ತುಗಳ ಮಾತ್ರಾ ವಿನಿಮಯ ಆಗುತ್ತಿತ್ತು. ಈಗ ಈ ನೂತನ ಒಪ್ಪಂದದ ಪ್ರಕಾರ ಅಡಿಕೆ ಕೂಡಾ ಮುಕ್ತವಾಗಿ ರಫ್ತು ಮಾಡಬಹುದಾದ ವಸ್ತುವಾಗಿದೆ. ಪಾಕಿಸ್ತಾನವು ಅಡಿಕೆಯನ್ನು ಹೆಚ್ಚಾಗಿ ಬಳಸುವ ದೇಶಗಳಲ್ಲಿ ಒಂದು. ಇದುವರೆಗಿನ ದಾಖಲೆಗಳ ಪ್ರಕಾರ ಪಾಕಿಸ್ತಾನವು ಭಾರತದ ಅಡಿಕೆಯನ್ನು ಇತರ ದೇಶಗಳ ಮೂಲಕ ಆಮದು ಮಾಡಿಕೊಂಡರೆ ಇಂಡೋನೇಶ್ಯಾ, ಮಲೇಶ್ಯಾ, ಥೈಲ್ಯಾಂಡ್ ಮೊದಲಾದ ದೇಶಗಳ ಮೂಲಕವೂ ವಾರ್ಷಿಕವಾಗಿ ಸುಮಾರು ೯೦ ಸಾವಿರದಿಂದ ೧ ಲಕ್ಷ ಟನ್ ಅಡಿಕೆಯನ್ನು ಪಾಕಿಸ್ತಾನವು ಆಮದು ಮಾಡಿಕೊಳ್ಳುತ್ತಿತ್ತು. ಇದರ ಜೊತೆಗೆ ಅಡಿಕೆಯ ಮೌಲ್ಯ ವರ್ಧಿತ ವಸ್ತುಗಳಾದ ಗುಟ್ಕಾ ಹಾಗೂ ಇನ್ನಿತರ ವಸ್ತುಗಳನ್ನು ದುಬೈ ಮೂಲಕ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈಗ ಮುಕ್ತ ಆಮದು ಅವಕಾಶ ಲಭ್ಯವಾದ ಕಾರಣ ಭಾರತದಿಂದ ನೇರವಾಗಿ ಪಾಕಿಸ್ತಾನಕ್ಕೆ ಅಡಿಕೆ ಆಮದು ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಪಾಕಿಸ್ತಾನವು ಇನ್ನಷ್ಟು ಅಡಿಕೆಯನ್ನು ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ , ಹೀಗಾಗಿ ಧಾರಣೆಯಲ್ಲಿ ಏರಿಕೆ ಆಗಲಿದೆ ಎನ್ನುವುದು ಡಾ.ವಿಘ್ನೇಶ್ವರ ವರ್ಮುಡಿ ಅಭಿಪ್ರಾಯ.
ಈ ಒಪ್ಪಂದವು ಮುಂದಿನ ವರ್ಷ ಅಂದರೆ ೨೦೧೨ ಮಾರ್ಚ್ ವೇಳೆಗೆ ಜಾರಿಗೆ ಬರುತ್ತದೆ. ಆ ಬಳಿಕ ಅಂದರೆ ಸರಿಸುಮಾರು ೨೦೧೨ ಡಿಸೆಂಬರ್ ಒಳಗಾಗಿ ಈ ಎಲ್ಲಾ ವ್ಯಾಪಾರಗಳು ಆರಂಭಗೊಳ್ಳಲಿದೆ ಎಂದು ವಿಘ್ನೇಶ್ವರ ಭಟ್ ಹೇಳುತ್ತಾರೆ. ಈ ಎಲ್ಲಾ ಕಾರಣಗಳಿಗಾಗಿ ಈಗಾಗಲೇ ಏರಿಕೆ ಕಂಡಿರುವ ಅಡಿಕೆ ಧಾರಣೆಯು ತೀರಾ ಕುಸಿಯಲು ಸಾಧ್ಯವೇ ಇಲ್ಲ , ಈಗಾಗಲೇ ಮಾರುಕಟ್ಟೆಯಲ್ಲಿ ಅಡಿಕೆ ಓಡಾಟ ಇಲ್ಲದೇ ಇರುವುದರಿಂದ ಧಾರಣೆ ಏರಿಕೆ ಸಾಧ್ಯತೆ ಇದೆ.ಆದರೆ ಬೆಳೆಗಾರರು ಯಾವತ್ತೂ ಕೂಡಾ ಆತಂಕಕ್ಕೆ ಒಳಗಾಗಲೇ ಬಾರದು.
ಅಡಿಕೆ ಮಾರುಕಟ್ಟೆಗೆ ಮತ್ತೆ ಸಿಗಲಿದೆ ಮಾನ್ಯತೆ ; ಗರಿಗೆದರಿದ ನಿರೀಕ್ಷೆಗಳು
ಪುತ್ತೂರು: ಅಡಿಕೆ ಮಾರುಕಟ್ಟೆ ಚೇತರಿಕೆಗೆ ಈಗ ಮತ್ತೊಂದು ಅಂಶ ಸೇರಿಕೊಂಡಿದೆ.ಮುಂದಿನ ವರ್ಷದ ಅಂತ್ಯದೊಳಗೆ ಭಾರತದಿಂದ ಪಾಕಿಸ್ತಾನಕ್ಕೆ ಮುಕ್ತವಾಗಿ ಅಡಿಕೆ ಸಾಗಾಟ ಮಾಡಬಹುದಾಗಿದೆ. ಹೀಗಾಗಿ ಭಾರತದ ಅಡಿಕೆಯು ನೇರವಾಗಿ ಪಾಕಿಸ್ತಾನಕ್ಕೆ ಹೋಗಬಹುದಾದ್ದರಿಂದ ಅಡಿಕೆ ಧಾರಣೆ ಸುಧಾರಿಸಲು ಇದು ಮಹತ್ವ ಪಡೆದುಕೊಳ್ಳಲಿದೆ.
ಅಡಿಕೆ ಬೆಳೆಗಾರರಿಗೆ ಇದೊಂದು ಸಿಹಿ ಸುದ್ದಿಯೇ ಹೌದು. ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ಭಟ್ ವರ್ಮುಡಿಯವರು ಅಡಿಕೆ ಮಾರುಕಟ್ಟೆಯ ಬಗ್ಗೆ ಅಧ್ಯಯನ ಮಾಡುತ್ತಲೇ ಧಾರಣೆಯ ಬಗ್ಗೆ ನಿಖರವಾಗಿ ಮಾತನಾಡಬಲ್ಲವರು. ಇತ್ತೀಚೆಗೆ ಅವರು ನಡೆಸಿ ಅಧ್ಯಯನವನ್ನು ಹಂಚಿಕೊಂಡಿದ್ದಾರೆ , ಭಾರತ ಮತ್ತು ಪಾಕಿಸ್ತಾನದ ನಡುವೆ ಆಹಾರ ವಸ್ತುಗಳು ಸೇರಿದಂತೆ ಇನ್ನಿತರ ವಸ್ತುಗಳ ವಿನಿಮಯದ ಮುಕ್ತ ವ್ಯಾಪಾರ ಒಪ್ಪಂದವು ನಡೆಯುತ್ತಿತು. ಇತ್ತೀಚೆಗೆ ಅಂದರೆ ನ.೧೫ ರಂದು ನಡೆದ ಹೊಸ ಒಪ್ಪಂದದ ಪ್ರಕಾರ ಒಟ್ಟು ೭೦೦೦ ವಸ್ತುಗಳು ಇನ್ನು ಮುಂದೆ ಭಾರತ ಹಾಗೂ ಪಾಕಿಸ್ತಾನದ ನಡುವೆ ವಿನಿಮಯ ಆಗಲಿದೆ. ಈ ಹಿಂದೆ ಕೇವಲ ೧೯೪೬ ವಸ್ತುಗಳ ಮಾತ್ರಾ ವಿನಿಮಯ ಆಗುತ್ತಿತ್ತು. ಈಗ ಈ ನೂತನ ಒಪ್ಪಂದದ ಪ್ರಕಾರ ಅಡಿಕೆ ಕೂಡಾ ಮುಕ್ತವಾಗಿ ರಫ್ತು ಮಾಡಬಹುದಾದ ವಸ್ತುವಾಗಿದೆ. ಪಾಕಿಸ್ತಾನವು ಅಡಿಕೆಯನ್ನು ಹೆಚ್ಚಾಗಿ ಬಳಸುವ ದೇಶಗಳಲ್ಲಿ ಒಂದು. ಇದುವರೆಗಿನ ದಾಖಲೆಗಳ ಪ್ರಕಾರ ಪಾಕಿಸ್ತಾನವು ಭಾರತದ ಅಡಿಕೆಯನ್ನು ಇತರ ದೇಶಗಳ ಮೂಲಕ ಆಮದು ಮಾಡಿಕೊಂಡರೆ ಇಂಡೋನೇಶ್ಯಾ, ಮಲೇಶ್ಯಾ, ಥೈಲ್ಯಾಂಡ್ ಮೊದಲಾದ ದೇಶಗಳ ಮೂಲಕವೂ ವಾರ್ಷಿಕವಾಗಿ ಸುಮಾರು ೯೦ ಸಾವಿರದಿಂದ ೧ ಲಕ್ಷ ಟನ್ ಅಡಿಕೆಯನ್ನು ಪಾಕಿಸ್ತಾನವು ಆಮದು ಮಾಡಿಕೊಳ್ಳುತ್ತಿತ್ತು. ಇದರ ಜೊತೆಗೆ ಅಡಿಕೆಯ ಮೌಲ್ಯ ವರ್ಧಿತ ವಸ್ತುಗಳಾದ ಗುಟ್ಕಾ ಹಾಗೂ ಇನ್ನಿತರ ವಸ್ತುಗಳನ್ನು ದುಬೈ ಮೂಲಕ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈಗ ಮುಕ್ತ ಆಮದು ಅವಕಾಶ ಲಭ್ಯವಾದ ಕಾರಣ ಭಾರತದಿಂದ ನೇರವಾಗಿ ಪಾಕಿಸ್ತಾನಕ್ಕೆ ಅಡಿಕೆ ಆಮದು ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಪಾಕಿಸ್ತಾನವು ಇನ್ನಷ್ಟು ಅಡಿಕೆಯನ್ನು ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ , ಹೀಗಾಗಿ ಧಾರಣೆಯಲ್ಲಿ ಏರಿಕೆ ಆಗಲಿದೆ ಎನ್ನುವುದು ಡಾ.ವಿಘ್ನೇಶ್ವರ ವರ್ಮುಡಿ ಅಭಿಪ್ರಾಯ.
ಈ ಒಪ್ಪಂದವು ಮುಂದಿನ ವರ್ಷ ಅಂದರೆ ೨೦೧೨ ಮಾರ್ಚ್ ವೇಳೆಗೆ ಜಾರಿಗೆ ಬರುತ್ತದೆ. ಆ ಬಳಿಕ ಅಂದರೆ ಸರಿಸುಮಾರು ೨೦೧೨ ಡಿಸೆಂಬರ್ ಒಳಗಾಗಿ ಈ ಎಲ್ಲಾ ವ್ಯಾಪಾರಗಳು ಆರಂಭಗೊಳ್ಳಲಿದೆ ಎಂದು ವಿಘ್ನೇಶ್ವರ ಭಟ್ ಹೇಳುತ್ತಾರೆ. ಈ ಎಲ್ಲಾ ಕಾರಣಗಳಿಗಾಗಿ ಈಗಾಗಲೇ ಏರಿಕೆ ಕಂಡಿರುವ ಅಡಿಕೆ ಧಾರಣೆಯು ತೀರಾ ಕುಸಿಯಲು ಸಾಧ್ಯವೇ ಇಲ್ಲ , ಈಗಾಗಲೇ ಮಾರುಕಟ್ಟೆಯಲ್ಲಿ ಅಡಿಕೆ ಓಡಾಟ ಇಲ್ಲದೇ ಇರುವುದರಿಂದ ಧಾರಣೆ ಏರಿಕೆ ಸಾಧ್ಯತೆ ಇದೆ.ಆದರೆ ಬೆಳೆಗಾರರು ಯಾವತ್ತೂ ಕೂಡಾ ಆತಂಕಕ್ಕೆ ಒಳಗಾಗಲೇ ಬಾರದು.
No comments:
Post a Comment