Saturday, 7 January 2012

ಅಡಿಕೆ ಕೊಯ್ಲಿನ ನಂತರ ಏನು ?


ಅಡಿಕೆ ಕೊಯ್ಲು ಆಯಿತು.ಅಂಗಳದಲ್ಲಿ ಹರಗಿ ಆಯಿತು.ಇನ್ನು ಅದನ್ನು ಮಗುಚ ಬೇಕಾ? ಮಗುಚದೇ ಇದ್ದರೆ ಏನಾಗುತ್ತದೆ?
 ·  ·  · 10 December 2011 at 20:12
    • Ananth Krishna ಏನು ಆಗುದಿಲ್ಲ ,ಸ್ವಾಲಪಾ ಪಟೊರ ಅಡಿಕೆ ಜಾಸ್ತಿ ಆಗುತ್ತದೆ .ಅಡಿಕೆ ಸರಿ ಒಣಗುದಿಲ್ಲ .
      10 December 2011 at 20:49 · 
    • Ramesh Delampady ಅಡಿಕೆ ಸಿಪ್ಪೆ ಸುಲಿಯಲು ಸ್ವಲ್ಪ ಗಟ್ಟಿ, ಆದರೆ ಅಡಿಕೆ ಹಾಳಾಗುವುದಿಲ್ಲ ಅಂಗಳ ಪೂರ್ತಿ ಒಣಗಿದ್ದರೆ.
      10 December 2011 at 21:14 · 
    • Ravi Shankara Bhatta Uppangala Jana Sikkidare Sariyaagi Haragsiraatu, Illaddare Summane Edigaada Hange Maaduvadu, Allada Ramesha?
      10 December 2011 at 22:17 ·  ·  2
    • Mahesh Puchchappady ಕಾಯಿ ಅಡಿಕೆ ಹೆಕ್ಕಿದ್ದೀರಾ ?
      11 December 2011 at 10:15 · 
    • Mahesh Puchchappady ಅಡಿಕೆ ಕಾಲ ಕಾಲಕ್ಕೆ ತಿರುಗಿಸಿದರೆ ಪಠಾರ ಕಡಿಮೆ ಆಗುತ್ತದೆ ಮತ್ತು ಹಳತಿದೆ ಇಡಲು ತೀರಾ ಒಳ್ಳೆಯದು ಅಂತಾರೆ.
      11 December 2011 at 10:16 · 
    • Shankaranarayana Bhat ಅಡಕೆಯನ್ನೂ ವಾರಕ್ಕೊಮ್ಮೆ ಮಗುಚುವದು ಒಳ್ಳೇದು ಅದಕ್ಕೆ ಕಾಲು ಹಾಕುವುದು ಬಹಳ ಒಳ್ಳೆ ವಿಧಾನ ...ಬೇಯಿಸಿದ ಭತ್ತ ವನ್ನೂ ಮಗುಚುವ ರೀತಿ ಕಾಲು ಎಳೆದುಕೊಂಡು ಹೋದರಾಯಿತು.. ಕೈ ಹಾಕುವುದಕ್ಕಿಂತ ಸಮಯ ಕಡಿಮೆ ಸಾಕು ...
      11 December 2011 at 11:05 ·  ·  1
    • Ramesh Delampady ಎಲಿಮಲೆಯ ಸಚ್ಚಿದಾನಂದರು ಅವರು ನಡೆಸಿದ ಒಂದು ಪ್ರಯೋಗದ ಬಗ್ಗೆ ಹೇಳಿದ್ದರು.ಒಂದೇ ಕೊಯ್ಲಿನ ಅಡಿಕೆಯನ್ನು ಎರಡು ಭಾಗ ಮಾಡಿ ಒಂದು ಭಾಗವನ್ನು ಮಾಮೂಲಿನಂತೆ ಮಗುಚಿದರು.ಇನ್ನೊಂದು ಭಾಗವನ್ನು ಮಗುಚದೇ ಹಾಗೆಯೇ ಬಿಟ್ಟರು.ಒಣಗಿದ ಬಳಿಕ ಒಮ್ಮೆಗೆ ಎರಡೂ ಭಾಗವನ್ನು ಒಟ್ಟಿಗೇ ತೆಗೆದು ಸುಲಿದು ಮಾರಾಟಕ್ಕೆ ಕೊಂಡುಹೋದರು.ಅವರಿಗೆ ಅಚ್ಚರಿ,ಮಗುಚದ ಭಾಗಕ್ಕೆ ಹೆಚ್ಚಿನ ಬೆಲೆ ಸಿಕ್ಕಿತಂತೆ.
      11 December 2011 at 11:08 · 
    • Ramesh Delampady ಈ ವರುಷ ಕಾಯಿ ಅಡಿಕೆ ಹೆಕ್ಕಲಿಲ್ಲ.ಹೆಕ್ಕಿದರೆ ಸುಲಿಯಲು ಸುಲಭವಾಗುತ್ತದಂತೆ,ಪಟೋರ,ಕರಿಗೋಟು ಕಡಿಮೆ ಸಿಕ್ಕಿ.
      11 December 2011 at 11:10 ·  ·  1
    • Venkata Krishnakk Ramesh Delampady ಅದ್ಯಾಕೋ ಎಲಿಮಲೆಯವರಿಗೆ ಹೆಚ್ಚು ರೇಟ್ ಸಿಕ್ಕಿದ್ದು...ವಿಚಾರಿಸಿದ್ರಾ.. ಕಾರಣ ಗೊತ್ತಾದ್ರೆ..ಕೆಲಸ ಕಮ್ಮಿ ಸಾಕಲ್ಲಾ..
      11 December 2011 at 13:25 ·  ·  1
    • Ramesh Delampady ಮಗುಚದ ಅಡಿಕೆಗೆ ಯಾಕೆ ಹೆಚ್ಚು ಬೆಲೆ ಕ್ಯಾಂಕೋದವರು ಕೊಟ್ಟರೋ ಅವರನ್ನೇ ಕೇಳಬೇಕಷ್ತೆ.ಆದರೆ ನಮಗೆ ಗೊತ್ತಾದದ್ದು, ಅಡಿಕೆ ಮಗುಚುವುದು ಅನಿವಾರ್ಯ ಅಲ್ಲ
      11 December 2011 at 14:25 · 
    • Venkata Krishnakk ನೀವು ಈಗ ಏನ್ಮಾಡ್ತೀರೀ..ಅಡಿಕೆ ಮಗುಚುವುದಿಲ್ವೇ...?
      11 December 2011 at 16:38 · 
    • Ramesh Delampady ಇಲ್ಲ,ಕಳೆದ ವರ್ಷ ಒಂದು ಕೊಯ್ಲಿಗೆ ಮಳೆ ಸಿಕ್ಕಿತ್ತು.ಆ ರಾಶಿ ಹಾಳಾಗಿದೆ.
      11 December 2011 at 20:25 · 

No comments:

Post a Comment